Wednesday, April 3, 2013

ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಕಟ್ಟಾಭಿಮಾನಿ ಕಾರ್ಯಕರ್ತರಿದ್ದಾರೆ: ಪ್ರದೀಪಗೌಡ



ಕಳೆದ ಮೂರು ದಿನಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ನಡೆಸಿದ್ದು ಎಲ್ಲೆಡೆ ಪಕ್ಷದ ಕಟ್ಟಾಭಿಮಾನಿ ಕಾರ್ಯಕರ್ತರಿದ್ದಾರೆ. ಅವರ ದೃಢಸಂಕಲ್ಪ ನನಗೆ ಅಚ್ಚರಿ ಮೂಡಿಸಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರದೀಪಗೌಡ ಮಾ.ಪಾಟೀಲ್ ಹೇಳಿದರು.
ಅವರು ಬುಧವಾರ ಮುನಿರಾಬಾದ್ ಸಿಮಾ ವ್ಯಾಪ್ತಿಯ ಅಗಳಕೇರ, ಹೊಸ ಶಿವಪುರ, ಹೊಸುರು ಹಾಗೂ ಮುನಿರಾಬಾದ್ ಗ್ರಾಮಗಳಲ್ಲಿ ತಮ್ಮ ಹಳೆ ಕಾರ್ಯಕರ್ತರನ್ನು ಭೇಟಿ ಅವರ ದಿಟ್ಟ ನಿಲುವು ಹಾಗೂ ಅಭಿಮಾನ ಕಂಡು ಆಶ್ಚರ್ಯಗೊಂಡರು. ನಂತರ ಮುನಿರಾಬಾದ್‌ನಲ್ಲಿ ಕಾರ್ಯಕರ್ತ ಮುಖಂಡರೊಂದಿಗೆ ಮಾತನಾಡಿ, ಈ ಹಿಂದೆ ಉಪಚುನಾವಣೆಯಲ್ಲಿ ಆದ ಅವಸರದ ಅವಘಡಗಳನ್ನು ಮನ್ನಿಸಿ ತಾವೇಲ್ಲಾ ಅಭಿಮಾನದಿಂದ ಪಕ್ಷ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವುದು ಸಂತೋಷ ತಂದಿದೆ. ಅದೇ ರೀತಿ ಕಾರ್ಯಕರ್ತರು ತಮ್ಮ ತಮ್ಮ ಪ್ರದೇಶಗಳಲ್ಲಿಯೇ ಇದ್ದು ಪಕ್ಷದ ಬೇರುಮಟ್ಟದ ಅಭಿಮಾನಿ ಜನತೆಗೆ ಅಭ್ಯರ್ಥಿ ಹಾಗೂ ಪಕ್ಷದ ಧೇಯುದ್ದೇಶಗಳನ್ನು ತಿಳಿಸಬೇಕಿದೆ ಎಂದು ಮನವಿ ಮಾಡಿದರು.
ನಾನು ಯಾವುದೇ ಅಧಿಕಾರದ ಆಮಿಷ್ಯಕ್ಕಾಗಿ ಬಿಸಿಲುಗುದರೆ ಬೆನ್ನುಹತ್ತಿಲ್ಲ, ನೀವು ನೀಡಿದ. ನಿಮ್ಮ ಅಧಿಕಾರ ಎಂದರೆ ಏನು? ಎಂಬುದನ್ನು ನನ್ನಿಂದ ಸಾಬೀತು ಪಡಿಸಲು ಚುನಾವಣೆಗಿಳಿದಿದ್ದೇನೆ. ನನ್ನದು ಅಭಿವೃದ್ಧಿ ಕಾರ್ಯವಾದರೆ ಅಧಿಕಾರ ನಿಮ್ಮ ಕೈಯಲ್ಲಿಯೇ ಇರುತ್ತದೆ ಎಂಬುದನ್ನು ಸಾಧಿಸಿ ತೋರಿಸುತ್ತೇನೆ. ಕಿಲ್ಲೇದರ ಮನೆತನದ ಕವಲೂರು ಗೌಡರ್ ಎಂಬ ಖ್ಯಾತಿಗೆ ಚ್ಯುತಿ ಬರದಂತೆ ನಡೆದುಕೊಂಡು ಬಂದಿದ್ದು ಮುಂದೆಯೂ ಅದೇ ಗೌರವಯುತವಾಗಿ ಬಾಳುವೇ ಕ್ಷೇತ್ರದ ಜನತೆ ನಮ್ಮ ಗ್ರಾಮದ ಜನತೆ ಎಂಬಂತೆ ಕಾಣುವುದಾಗಿ ಭರವಸೆ ನೀಡಿ ಅದಕ್ಕೆ ತಾವೇಲ್ಲಾ ಅವಕಾಶ ನೀಡುವಿರೆಂದು ನಂಬಿರುವೆ ಎಂದು ಗೌಡರು ಬಾವುಕರಾಗಿ  ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ಎಂ.ಬಿ. ಹುಸೇನ್ ಮಾಸ್ಟರ್, ಕೊಟ್ರಪ್ಪ,  ನ್ಯಾಯವಾದಿ ಆರ್. ಎಂ. ಕಿಲ್ಲೇದರ್, ಆರೀಫ್, ಪಕ್ಷದ ತಾಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಹೆಚ್. ರಮೇಶ ಓನಬಳ್ಳಾರಿ, ಬುಲ್ಲುಸಾಬ, ಸುರೇಂದ್ರ, ನರಸರಡ್ಡಿ, ಜಾಫರ್ ಷಾ, ಆರೀಫ್,  ರಾಜು ಹಲಗೇರಿ, ಇಸೂಫ್‌ಖಾನ್, ವೆಂಕಟೇಶ ಬೆಲ್ಲದ್, ಮಂಜುನಾಥ ಗಡ್ಡದ್, ನಾನಿ, ಮರಿಯಪ್ಪ ಗುಡದಳ್ಳಿ, ರಾಜಶೇಖರ ನಾಯಕ, ಮಹಿಬೂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

0 comments:

Post a Comment