Sunday, April 7, 2013

ಭಾಗ್ಯನಗರ: ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ




ಕೊಪ್ಪಳ, ಏ.೦೭: ಸಮೀಪದ ಭಾಗ್ಯನಗರ ಗ್ರಾಮದ ಬಿಜೆಪಿಯ ವಿವಿಧ ಮುಖಂಡರು ರವಿವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಪಕ್ಷದ ರಾಷ್ಟ್ರೀಯ ನಾಯಕ ಹೆಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಹಾಗೂ ಜನಾನುರಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ಕ್ಷೇತ್ರದ ಪ್ರಗತಿಪರ ಚಿಂತನೆಯ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿಪಾಟೀಲ್ ರವರ ನಾಯಕತ್ವಕ್ಕೆ ನೆಚ್ಚಿ ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಿರುವುದಾಗಿ ತೊಂಡಪ್ಪ ದಲಬಂಜನ್, ಕನಕಾಚಲ ದಲಬಂಜನ್, ಪದ್ಮಸಾಲಿ ಸಮಾಜದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಏಕಪ್ಪ ದೇವದುರ್ಗ, ಶಾಂತಮ್ಮ ಬಾವಿಕಟ್ಟಿ ಮತ್ತು ಶರಣಮ್ಮ ನೇತೃತ್ವದ ಮಹಿಳಾ ಗುಂಪಿನ ಸದಸ್ಯರು ಪಕ್ಷ ಸೇರ್ಪಡೆ ಸಂದರ್ಭದಲ್ಲಿ ತಿಳಿಸಿದರು. ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿಪಾಟೀಲ್ ಪ್ರತಿ ಮುಖಂಡ ಮನೆ ಮನೆಗೆ ತೇರಳಿ ಅವರಿಗೆ ಪಕ್ಷದ ಶಾಲು ಮತ್ತು ಹೂಮಾಲೆ ಹಾಕುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕಾಧ್ಯಕ್ಷ ಅಂದಪ್ಪ ಮರೆಬಾಳ, ಮುಖಂಡರಾದ ವಿರೇಶ ಮಾಹಾಂತಯ್ಯನಮಠ, ಎಂ.ಡಿ. ಹುಸೇನ್ ಮಾಸ್ಟರ್, ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ರಾಜು ಹಲಗೇರಿ, ಮಂಜುನಾಥ ಗಡ್ಡದ್, ರಾಮಚಂದ್ರಪ್ಪ ಚಳಮಠದ, ಶಶಿಧರ ಹುರಕಡ್ಲಿ, ಮಂಜುನಾಥ ಶ್ಯಾವಿ, ರಾಮಚಂದ್ರಪ್ಪ ಅಡ್ಡೇದಾರ, ವಸಂತ ಶ್ಯಾವಿ, ರವಿ ಬಂಗಾಳಿ, ತೊಂಡುಸಾ ದಲಬಂಜನ್, ನೀಲಕಂಠಪ್ಪ ಮ್ಯಾಳಿ, ಸಿದ್ದಪ್ಪ ಗೊಂಬಿ, ಮಲ್ಲಿಕಾರ್ಜುನ ಎಸ್., ರಾಜು ಪುರಾಣಿಕಮಠ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

0 comments:

Post a Comment